Our Activities

ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ

ಒಳ್ಳೆಯದನ್ನುಬಯಸು ಇದು ಕೇವಲ ಸೇವೆಯಲ್ಲ ನಾವು ಮಾಡಬೇಕಾದಂತಹ ಕರ್ತವ್ಯ.

ರಾಜ್ಯದಲ್ಲಿ ಕೋರೋಣ ಸೋಂಕು ಬಾಧಿಸಿತ್ತು ಈ ಕಾರಣದಿಂದ ಜಿಲ್ಲಾಡಳಿತವು ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಗ್ರಾಮ ಗ್ರಾಮಕ್ಕೆ ದಿಗ್ಬಂಧನ ವಿಧಿಸಿತು. ಇದರಿಂದಾಗಿ ಇಡಿ ಗ್ರಾಮವೇ ಸ್ತಬ್ಧವಾಗಿತ್ತು. ಬಡವರು ಅಗತ್ಯ ಆಹಾರಕ್ಕಾಗಿ ಪರದಾಡುತ್ತಿದ್ದರು.

ಇದನ್ನು ಮನಗಂಡ ಯಂಗ್ ಯುನಿಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ ಮಂಗಳೂರು ಇದರ ಮುತ್ಸದ್ದಿತ ನಾಯಕ ಇಬ್ರಾಹಿಂ ಬಜ್ಪೆ ನೇತೃತ್ವದಲ್ಲಿ ಒಂದು ಲಕ್ಷದ 25 ಸಾವಿರ ರೂಪಾಯಿ ವೆಚ್ಚದಲ್ಲಿ ಆಹಾರ ಸಾಮಾಗ್ರಿಗಳನ್ನು ರಾಜ್ಯದ ಸಜಿಪ, ಬಜ್ಪೆ, ಕೆ.ಸಿ.ರೋಡ್, ದೇರಳಕಟ್ಟೆ, ಅಡ್ಡೂರ್, ನಂದಾವರ, ಮಡಿಕೇರಿ ಹಾಗು ವಾಟ್ಸಪ್ಪ್ ಮತ್ತು ಫೇಸ್ಬುಕ್ ಮೂಲಕ ಬಂದ ಕರೆಗಳಿಗೂ ಸ್ಪಂದಿಸಿ ಹಲವು ಗ್ರಾಮಗಳಿಗೆ ಸುಮಾರು 500-600 ಹಿಂದೂ-ಮುಸ್ಲಿಂ ಬಡಕುಟುಂಬಗಳಿಗೆ ವಿತರಿಸಲಾಯಿತು. ಕೋರೋಣ ಪಿಡುಗಿನ ಲಾಕ್ಡೌನ್ ಸಿಲುಕಿದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಪಾಲಿಗಿದು ಸ್ವಲ್ಪಮಟ್ಟಿನ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ ಎಂಬುದು ವಿತರಣೆಯ ಸಂದರ್ಭದಲ್ಲಿ ಕೆಲವು ಫಲಾನುಭವಿಗಳು ಆಡಿದ ಮಾತುಗಳೇ ಸಾಕ್ಷಿ.

ವಿತರಣಾ ಜವಾಬ್ದಾರಿಯನ್ನು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಎಸ್.ಜಿ ಅಫ್ರಿಝ್ ವಹಿಸಿದರು.